Wednesday 12 September, 2012


ಕಾಲೇಜು ವಿದ್ಯಾಥಿ೯ಗಳಿಗೆ ಕೖಷಿ ಖುಷಿ ಪಾಠ

- ಅಳುಕಿನಿಂದ ಗದ್ದೆಯೊಳಗಿಳಿದು ಸಂಭ್ರಮಪಟ್ಟ ವಿದ್ಯಾಥಿ೯ಗಳು
- ಹೂಟಿ ಹೊಡೆದರು, ನಾಟಿ ಮಾಡಿದರು



ಶ್ರೀಕಾಂತ ಭಟ್

ಶಿವಮೊಗ್ಗ- ಹೈಫೈ ಉದ್ಯೋಗದ ಕನಸು ಹೊತ್ತು ಸೈನ್ಸ್್, ಆಟ್ಸ್್೯, ಕಾಮಸ್್೯ ಎಂದು ಓದಿಕೊಂಡಿದ್ದ ಮಕ್ಕಳು
ಅಂದು ಗದ್ದೆಗಿಳಿದಿದ್ದರು. ಓದು, ಕನಸು ಎಲ್ಲವನ್ನೂ ಪಕ್ಕಕ್ಕಿಟ್ಟು ಕೖಷಿಲೋಕದಲ್ಲಿ ಒಂದು ಸುತ್ತುಹಾಕಿಬಂದು ಸಂಭ್ರಮಿಸಿದ ಕ್ಷಣವದು.
ಇದು ಕೖಷಿ ಪಾಠದ ಒಂದು ಝಲಕ್್.
ಗ್ರಾಮೀಣ ಭಾಗದಲ್ಲಿ  ಕೖಷಿ ಕೇವಲ ಮಧ್ಯವಯಸ್ಕರಿಗೆ  ಸೀಮಿತ ಎನ್ನುವಂತಾಗಿದೆ. ಅಲ್ಲದೆ ಮಲೆನಾಡಿನಲ್ಲಿ  ಕೖಷಿ ಚಟುವಟಿಕೆಗಳಿಗೆ ಕಾಮಿ೯ಕರೆ ಸಿಗದಂತಾಗಿದ್ದು ಕೖಷಿಕರು  ಕೖಷಿಯಿಂದ ದೂರಾಗುತ್ತಿದ್ದಾರೆ. ಇಂತಹ ಸಂದಭ೯ದಲ್ಲಿ ಕೖಷಿಯ ಸಮಸ್ಯೆಗೊಂದು  ಪರಿಹಾರ  ಕಂಡುಕೊಳ್ಳುವ  ಪ್ರಯತ್ನ  ಒಂದು ನಡೆಯಿತು. ಅದಕ್ಕಾಗಿಯೇ ಶಾಲೆಯ ವಿದ್ಯಾಥಿ೯, ವಿದ್ಯಾಥಿ೯ನಿಯರಿಗೆ ಕೖಷಿಪಾಠ ಹೇಳಿಕೊಡಲು ಶ್ರೀಕ್ಷೇತ್ರ  ಧಮ೯ಸ್ಥಳ  ಗ್ರಾಮೀಣಾಭಿವೖದ್ಧಿ ಯೋಜನೆ ವೇದಿಕೆ ಕಲ್ಪಿಸಿತ್ತು.
ಜಿಲ್ಲೆಯ  ತೀಥ೯ಹಳ್ಳಿ ತಾಲೂಕು ಮಾಳೂರು ಗ್ರಾಮದಲ್ಲಿ ಈ ವೇದಿಕೆ ಸೖಷ್ಟಿಯಾಗಿತ್ತು. ಪದವಿ ಪೂರ್ವ ಕಾಲೇಜಿನ ವಿದ್ಯಾಥಿ೯ಗಳನ್ನೆಲ್ಲ ಗದ್ದೆಗಿಳಿಸಿ, ಕೖಷಿಯ ಪದ್ಧತಿ, ರೀತಿ ನೀತಿ, ಸಂಪ್ರದಾಯವನ್ನು ತಿಳಿಸಿಕೊಡುವ ಪ್ರಯತ್ನ ಮಾಡಲಾಯಿತು. ಅನಕ್ಷರಸ್ಥ ಮಹಿಳಾ ಕೖಷಿ  ಪಂಡಿತರು ಚಾಚುತಪ್ಪದೆ ಕೖಷಿ ಪಾಠ ಹೇಳಿಕೊಟ್ಟರು.
ಅಪರೂಪದ ಅವಕಾಶ ಎಂದೋ ಅಥವಾ  ಮಣ್ಣಿಗಿಳಿಯುವ  ಸಂಭ್ರಮವೋಗೊತ್ತಿಲ್ಲ  ವಿದ್ಯಾಥಿ೯ವಿದ್ಯಾಥಿ೯ನಿಯರಂತು ಇರುವುದರಲ್ಲೆ ಕೊಂಚಕೊಂಚ ತಿಣುಕುತ್ತಲೇ ನಾಟಿಗೆ ಇಳಿದೇ  ಬಿಟ್ಟಿದ್ದರು. ಹೇಗೆ  ನೆಡಬೇಕು, ಎಷ್ಟೆಷ್ಟು ಪ್ರಮಾಣ ನಡೆಬೇಕು ಎಂದು ಹಿರಿಯರಿಂದ ಮಾಹಿತಿ ಪಡೆದು ನಾಟಿ ಆರಂಭಿಸಿದರು. ಮೊದಮೊದಲು ನಿಧಾನವಾಗಿ ನಡೆದ ನೆಟ್ಟಿಕಾಯ೯ ನಂತರ  ವೇಗ  ಪಡೆದುಕೊಂಡಿತು. ಮತ್ತೊಂದೆಡೆ  ವಿದ್ಯಾಥಿ೯ಗಳು  ನಾವೇನು ಕಮ್ಮಿ ಇಲ್ಲ ಅನ್ನುವಂತೆ  ನೇಗಿಲು  ಹೂಡಲು ಆರಂಭಿಸಿದರು. ಟ್ರಿಲ್ಲರ್್ ಚಲಾಯಿಸಿ ಗದ್ದೆಯನ್ನು ಹದ ಮಾಡಿದರು. ಅಷ್ಟೆ  ಅಲ್ಲದೆ  ಗಂಡಾಳಿನ  ಕೆಲಸಗಳಲ್ಲಿ ಭಾಗಿಯಾಗಿ ಅಂತಿಮವಾಗಿ ನೆಟ್ಟಿಯನ್ನೂ ಮಾಡಿ  ಸೈ ಅನಿಸಿಕೊಂಡರು.
ಅಧ೯ ದಿನವಿಡಿ ನಡೆದ  ಸಾಮೂಹಿಕ ನಾಟಿಕಾಯ೯ ವಿದ್ಯಾಥಿ೯ಗಳಿಗೆ ನೇಗಿಲಯೋಗಿಯ ಪಾಠದ ಅನುಭವದ ಜೊತೆಗೆ ಕೆಸರು ನೀರಿನಲ್ಲಿ ಸಂಭ್ರಮದ ಅಲೆಯನ್ನೆಬ್ಬಿಸಿತು.
ಅದೇ ರೀತಿ ಗಂಟೆಗಟ್ಟಲೇ ಕಪ್ಪು ಹಲಗೆಯ ಮುಂದೆ ನಿಂತು ಪಾಠ ಮಾಡುವ ಮೇಸ್ಟ್ರುಗಳು ಕೂಡ ಕೈ ಕೆಸರು ಮಾಡಿಕೊಂಡರು. ವಿದ್ಯಾಥಿ೯ಗಳೊಂದಿಗೆ ಸೇರಿ ಕೆಸರು ಗದ್ದೆಯಲ್ಲಿ ನಾಟಿ ಮಾಡಿ ವಿದ್ಯಾಥಿ೯ಗಳಿಗೆ ಪ್ರೋತ್ಸಾಹ ನೀಡಿದರು.
ಗದ್ದೆಯ ಕೆಲಸದಲ್ಲಿ ತೊಡಗಿಕೊಂಡಿದ್ದು ಖುಷಿ ತಂದಿತು ಎಂದು ಇದೇ ಸಂದಭ೯ದಲ್ಲಿ ಕಾಲೇಜು ವಿದ್ಯಾಥಿ೯ಗಳು ಅಭಿಪ್ರಾಯಪಟ್ಟರು. ಮತ್ತೆ ಕೆಲವರು, ನಮ್ಮ ಮನೆಯಲ್ಲಿ ಗದ್ದೆ ಇದ್ದರೂ ಕೆಲಸ ಮಾಡಿದ ಅನುಭವ ಇರಲಿಲ್ಲ. ಇಲ್ಲಿ ಕೆಲಸ ಮಾಡಿ ಸಂಭ್ರಮಿಸಿದೆವು ಎಂದರು.
ಇಂದಿನ ಯುವ ಜನರಲ್ಲಿ ಕೖಷಿ ಬಗ್ಗೆ ಒಲವು ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಾಗೖತಿ ಮೂಡಿಸುವ ಉದ್ದೇಶದಿಂದ ಈ ಪ್ರಯತ್ನ ನಡೆಸಿದೆವು. ವಿದ್ಯಾಥಿ೯ಗಳು ಸಾಕಷ್ಟು ಸಂಭ್ರಮಪಟ್ಟರು ಎಂದು ಧಮ೯ಸ್ಥಳ ಗ್ರಾಮಾಭಿವೖದ್ಧಿ ಯೋಜನೆಯ ಕೖಷಿ ಮೇಲ್ವಿಚಾರಕ ಶಶಿಧರ್್ ಕನ್ನಡಪ್ರಭಕ್ಕೆ ವಿವರಿಸಿದರು.
ಮಲೆನಾಡು ಭಾಗದಲ್ಲಿ ಮಕ್ಕಳು ದ್ವಿತೀಯ ಪಿಯುಸಿ ಮುಗಿಯುತ್ತಿದ್ದಂತೆ ನಾವು ಬೆಂಗಳೂರಿಗೆ ಹೋಗುವವರು ಎಂಬ ಭಾವನೆ ಬಂದು ಬಿಟ್ಟಿದೆ. ಇಂತವರ ಮನಸ್ಸಿನಲ್ಲಿ ಕೖಷಿಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಇದಾಗಿತ್ತು ಎಂದು ತಿಳಿಸಿದರು.

No comments: