Wednesday 12 September, 2012


ರಾಜ್ಯದ ಪಶು ಆಸ್ಪತ್ರೆಗಳ ಕಾಯ೯ನಿವ೯ಹಣೆ ವೇಳೆ ಬದಲು

- ಬದಲಾದ ರೈತರು ಹಾಗೂ ಪಶುವೈದ್ಯರ ಕಾಯ೯ಚಟುವಟಿಕೆ
- ಪಶು ಇಲಾಖೆ ಸಂಘಟನೆಗಳಿಂದ ಒತ್ತಡ, ಅಧಿಕಾರಿಗಳ ವರದಿ ಹಿನ್ನೆಲೆ
- ಬೆಳಿಗ್ಗೆ ಅಧ೯ಗಂಟೆ ತಡ ಆರಂಭ, ಅಧ೯ಗಂಟೆ ಮುಂಚಿತವಾಗಿ ಮುಚ್ಚುವ ಕೇಂದ್ರಗಳು

ಶ್ರೀಕಾಂತ ಭಟ್್
ಶಿವಮೊಗ್ಗ- ಪಶು ಸಾಕಾಣಿಕೆದಾರರಿಗೊಂದು ಸುದ್ದಿ, ರಾಜ್ಯದಲ್ಲಿರುವ 3450 ಪಶು ಆಸ್ಪತ್ರೆಯ ಸಮಯ ಬದಲಾಗಿದೆ.
ರೈತರ ಮನಸ್ಥಿತಿ ಮತ್ತು ಕಾಯ೯ಚಟುವಟಿಕೆ ಬದಲಾದ ಹಿನ್ನೆಲೆಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯು ತನ್ನ ಸಂಸ್ಥೆಗಳ ಕಾಯ೯ನಿವ೯ಹಣೆ ಅವಧಿಯಲ್ಲಿ ಕೊಂಚ ಬದಲಿಸಿಕೊಂಡಿದೆ.
ರಾಜ್ಯ ಸಕಾ೯ರಿ ಪಶು ವೈದ್ಯರ ಸಂಘ, ಆಡಳಿತಾತ್ಮಕ ಅಧಿಕಾರಿಗಳ ಮತ್ತು ನೌಕರರ ಸಂಘ, ಕನಾ೯ಟಕ ಪಶುವೈದ್ಯಕೀಯ ಪರೀಕ್ಷಕರ ಸಂಘ, ರಾಜ್ಯ ಪಶುಸಂಗೋಪನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಡಿ ಗ್ರೂಪ್್ ನೌಕರರ ಸಂಘ, ರಾಜ್ಯ ಪಶುವೈದ್ಯರ ಸಂಘ, ಕನಾ೯ಟಕ ಪಶು ವೈದ್ಯಕೀಯ ಸಂಘದ ಅಭಿಪ್ರಾಯದ ಆಧಾರದ ಮೇಲ ವೇಳಾಪಟ್ಟಿಯನ್ನು ಬದಲಿಸಲಾಗಿದೆ.
ಇದರ ನಡುವೆಯೇ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಉಪ ನಿದೇ೯ಶಕರು ಜಿಲ್ಲಾ ಪಂಚಾಯಿತಿಗಳ ಅಭಿಪ್ರಾಯದೊಂದಿಗೆ ಸಲ್ಲಿಸಿರುವ ವರದಿಯನ್ನು ಪರಿಶೀಲಿಸಿ ಅಂತಿಮವಾಗಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪಶುವೈದ್ಯ ಸಂಸ್ಥೆಗಳ ಕಾಯ೯ನಿವ೯ಹಣೆಯ ವೇಳೆಯನ್ನು ಬದಲಿಸಲಾಗಿದೆ.
- ಬದಲಾದ ಸಮಯ
ಕೆಲಸದ ದಿನಗಳಲ್ಲಿ ಪಶುವೈದ್ಯ ಸಂಸ್ಥೆಗಳು ಬೆಳಿಗ್ಗೆ 8.30ರಿಂದ ಮಧ್ಯಾಹ್ನ 12.30ರವರೆಗೆ, ಅಪರಾಹ್ನ 3.30ರಿಂದ ಸಂಜೆ 5.30ರವರೆಗೆ ಕಾಯ೯ನಿವ೯ಹಿಸುತ್ತಿತ್ತು. ಇನ್ನು ಮುಂದೆ ಈ ಕೇಂದ್ರಗಳು ಬೆಳಿಗ್ಗೆ 9ಗಂಟೆಗೆ ಆರಂಭವಾಗಿ ಮಧ್ಯಾಹ್ನ 1 ಗಂಟೆ ವರೆಗೆ ಅಪರಾಹ್ನ 3ರಿಂದ ಸಂಜೆ 5 ಗಂಟೆ ವರೆಗೆ ಕಾಯ೯ನಿವ೯ಹಿಸುವುದು. ಅಥಾ೯ತ್್, ಪಶು ಆಸ್ಪತ್ರೆಗಳು ಬೆಳಿಗ್ಗೆ ಅಧ೯ಗಂಟೆ ತಡವಾಗಿ ಆರಂಭವಾಗಿ, ಸಂಜೆ ಅಧ೯ ಗಂಟೆ ಮುಂಚಿತವಾಗಿ ಬಾಗಿಲು ಮುಚ್ಚಲಿವೆ.
ಸಾವ೯ತ್ರಿಕ ರಜಾ ದಿನಗಳಲ್ಲಿ ಈ ಮುಂಚೆ ಬೆಳಿಗ್ಗೆ 8.30ರಿಂದ 12.30ರವರೆಗೆ ಕಾಯ೯ನಿವ೯ಹಿಸುತ್ತಿದ್ದ ಕೇಂದ್ರಗಳು ಇನ್ನು ಮುಂದೆ 9ರಿಂದ 1ಗಂಟೆಗೆ ಕಾಯ೯ನಿವ೯ಹಿಸುವುದು.
ರಾಜ್ಯದ ತಾಲೂಕು ಮಟ್ಟದ ಕೆಳಗಿರುವ ಆಸ್ಪತ್ರೆಗಳಲ್ಲಿ ಈ ತಿಂಗಳಿನಿಂದಲೇ ಬದಲಾದ ಸಮಯದಲ್ಲಿ ಕಾಯ೯ನಿವ೯ಹಣೆಯಾಗಲಿದೆ.

- ಏಕಾಗಿ ಬದಲಾವಣೆ?
ಇತ್ತೀಚಿನ ದಿನಗಳಲ್ಲಿ ರೈತರ ಮನಸ್ಥಿತಿ ಬದಲಾವಣೆಯಾಗಿದೆ. ಜೊತೆಗೆ ಅವರ ಕಾಯ೯ಚಟುವಟಿಕೆಯಲ್ಲಿ ಕೂಡ ಬದಲಾವಣೆಯಾಗಿದೆ. ಈ ಹಿನ್ನೆಲೆಯಲ್ಲಿ ವೇಳಾಪಟ್ಟಿ ಬದಲಿಸಿದ್ದು ಸರಿಯಾದ ಕ್ರಮ ಎನ್ನುತ್ತಾರೆ ಕನಾ೯ಟಕ ಪಶು ವೈದ್ಯಕೀಯ ಸಂಘದ ರಾಜ್ಯ ಉಪಾಧ್ಯಕ್ಷ ಟಿ.ಎಚ್್. ನಟರಾಜ್್.
ಈ ಮುಂಚೆ ಗ್ರಾಮೀಣ ಭಾಗದಲ್ಲಿ ಜಾನುವಾರನ್ನು ಆಸ್ಪತ್ರೆಗೆ ತರುವ ಪರಿಪಾಟ ಇತ್ತು. ಕೖತಕ ಗಭ೯ಧಾರಣೆ, ಚಿಕಿತ್ಸೆ ಎಲ್ಲಕ್ಕೂ ಆಸ್ಪತ್ರೆಯನ್ನು ಅವಲಂಬಿಸಿದ್ದರು. ಆದರೆ, ಈ ಕಾಯ೯ ಬದಲಾಗಿದೆ. ವೈದ್ಯರೇ ರೈತರ ಕ್ಷೇತ್ರಗಳಿಗೆ ಭೇಟಿಕೊಟ್ಟು ಜಾನುವಾರನ್ನು ಪರೀಕ್ಷಿಸುತ್ತಾರೆ, ಚಿಕಿತ್ಸೆ ನೀಡುತ್ತಿದ್ದಾರೆ. ಅದೇ ರೀತಿ ಕೖಷಿ ಕಾಮಿ೯ಕರ ಕೊರತೆಯಿಂದಾಗಿ ರೈತರು ಕೂಡ ಜಾನುವಾರನ್ನು ಆಸ್ಪತ್ರೆಗೆ ಕರೆತರಲು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಶಿವಮೊಗ್ಗದ ಪಶು ವೈದ್ಯರೊಬ್ಬರ ಅಭಿಪ್ರಾಯ.
ಪಶು ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಯೋಜನೆ ನಡೆಸುವುದರಿಂದ  ಪಶುವೈದ್ಯರೇ ನೇರವಾಗಿ ಹಳ್ಳಿಗೆ ಭೇಟಿಕೊಡುತ್ತಿದ್ದಾರೆ. ಹೀಗಾಗಿ ಸಮಯ ಬದಲಾವಣೆ ಅವಶ್ಯಕತೆ ಇತ್ತು ಎಂದು ಟಿ.ಎಚ್್. ನಟರಾಜ್್ ಸಮಥಿ೯ಸಿಕೊಳ್ಳುತ್ತಾರೆ. ಅದೇ ರೀತಿ ಮಧ್ಯಾಹ್ನದ ಊಟದ ವಿರಾಮ 2 ಗಂಟೆ ಇದ್ದು, ಇಷ್ಟು ಅಗತ್ಯವಿರಲಿಲ್ಲ ಎಂದು ಎಂದು ಹೇಳಿದ್ದಾರೆ.

No comments: