Wednesday 12 September, 2012


ಕಾಲೇಜು ವಿದ್ಯಾಥಿ೯ಗಳಿಗೆ ಕೖಷಿ ಖುಷಿ ಪಾಠ

- ಅಳುಕಿನಿಂದ ಗದ್ದೆಯೊಳಗಿಳಿದು ಸಂಭ್ರಮಪಟ್ಟ ವಿದ್ಯಾಥಿ೯ಗಳು
- ಹೂಟಿ ಹೊಡೆದರು, ನಾಟಿ ಮಾಡಿದರು



ಶ್ರೀಕಾಂತ ಭಟ್

ಶಿವಮೊಗ್ಗ- ಹೈಫೈ ಉದ್ಯೋಗದ ಕನಸು ಹೊತ್ತು ಸೈನ್ಸ್್, ಆಟ್ಸ್್೯, ಕಾಮಸ್್೯ ಎಂದು ಓದಿಕೊಂಡಿದ್ದ ಮಕ್ಕಳು
ಅಂದು ಗದ್ದೆಗಿಳಿದಿದ್ದರು. ಓದು, ಕನಸು ಎಲ್ಲವನ್ನೂ ಪಕ್ಕಕ್ಕಿಟ್ಟು ಕೖಷಿಲೋಕದಲ್ಲಿ ಒಂದು ಸುತ್ತುಹಾಕಿಬಂದು ಸಂಭ್ರಮಿಸಿದ ಕ್ಷಣವದು.
ಇದು ಕೖಷಿ ಪಾಠದ ಒಂದು ಝಲಕ್್.
ಗ್ರಾಮೀಣ ಭಾಗದಲ್ಲಿ  ಕೖಷಿ ಕೇವಲ ಮಧ್ಯವಯಸ್ಕರಿಗೆ  ಸೀಮಿತ ಎನ್ನುವಂತಾಗಿದೆ. ಅಲ್ಲದೆ ಮಲೆನಾಡಿನಲ್ಲಿ  ಕೖಷಿ ಚಟುವಟಿಕೆಗಳಿಗೆ ಕಾಮಿ೯ಕರೆ ಸಿಗದಂತಾಗಿದ್ದು ಕೖಷಿಕರು  ಕೖಷಿಯಿಂದ ದೂರಾಗುತ್ತಿದ್ದಾರೆ. ಇಂತಹ ಸಂದಭ೯ದಲ್ಲಿ ಕೖಷಿಯ ಸಮಸ್ಯೆಗೊಂದು  ಪರಿಹಾರ  ಕಂಡುಕೊಳ್ಳುವ  ಪ್ರಯತ್ನ  ಒಂದು ನಡೆಯಿತು. ಅದಕ್ಕಾಗಿಯೇ ಶಾಲೆಯ ವಿದ್ಯಾಥಿ೯, ವಿದ್ಯಾಥಿ೯ನಿಯರಿಗೆ ಕೖಷಿಪಾಠ ಹೇಳಿಕೊಡಲು ಶ್ರೀಕ್ಷೇತ್ರ  ಧಮ೯ಸ್ಥಳ  ಗ್ರಾಮೀಣಾಭಿವೖದ್ಧಿ ಯೋಜನೆ ವೇದಿಕೆ ಕಲ್ಪಿಸಿತ್ತು.
ಜಿಲ್ಲೆಯ  ತೀಥ೯ಹಳ್ಳಿ ತಾಲೂಕು ಮಾಳೂರು ಗ್ರಾಮದಲ್ಲಿ ಈ ವೇದಿಕೆ ಸೖಷ್ಟಿಯಾಗಿತ್ತು. ಪದವಿ ಪೂರ್ವ ಕಾಲೇಜಿನ ವಿದ್ಯಾಥಿ೯ಗಳನ್ನೆಲ್ಲ ಗದ್ದೆಗಿಳಿಸಿ, ಕೖಷಿಯ ಪದ್ಧತಿ, ರೀತಿ ನೀತಿ, ಸಂಪ್ರದಾಯವನ್ನು ತಿಳಿಸಿಕೊಡುವ ಪ್ರಯತ್ನ ಮಾಡಲಾಯಿತು. ಅನಕ್ಷರಸ್ಥ ಮಹಿಳಾ ಕೖಷಿ  ಪಂಡಿತರು ಚಾಚುತಪ್ಪದೆ ಕೖಷಿ ಪಾಠ ಹೇಳಿಕೊಟ್ಟರು.
ಅಪರೂಪದ ಅವಕಾಶ ಎಂದೋ ಅಥವಾ  ಮಣ್ಣಿಗಿಳಿಯುವ  ಸಂಭ್ರಮವೋಗೊತ್ತಿಲ್ಲ  ವಿದ್ಯಾಥಿ೯ವಿದ್ಯಾಥಿ೯ನಿಯರಂತು ಇರುವುದರಲ್ಲೆ ಕೊಂಚಕೊಂಚ ತಿಣುಕುತ್ತಲೇ ನಾಟಿಗೆ ಇಳಿದೇ  ಬಿಟ್ಟಿದ್ದರು. ಹೇಗೆ  ನೆಡಬೇಕು, ಎಷ್ಟೆಷ್ಟು ಪ್ರಮಾಣ ನಡೆಬೇಕು ಎಂದು ಹಿರಿಯರಿಂದ ಮಾಹಿತಿ ಪಡೆದು ನಾಟಿ ಆರಂಭಿಸಿದರು. ಮೊದಮೊದಲು ನಿಧಾನವಾಗಿ ನಡೆದ ನೆಟ್ಟಿಕಾಯ೯ ನಂತರ  ವೇಗ  ಪಡೆದುಕೊಂಡಿತು. ಮತ್ತೊಂದೆಡೆ  ವಿದ್ಯಾಥಿ೯ಗಳು  ನಾವೇನು ಕಮ್ಮಿ ಇಲ್ಲ ಅನ್ನುವಂತೆ  ನೇಗಿಲು  ಹೂಡಲು ಆರಂಭಿಸಿದರು. ಟ್ರಿಲ್ಲರ್್ ಚಲಾಯಿಸಿ ಗದ್ದೆಯನ್ನು ಹದ ಮಾಡಿದರು. ಅಷ್ಟೆ  ಅಲ್ಲದೆ  ಗಂಡಾಳಿನ  ಕೆಲಸಗಳಲ್ಲಿ ಭಾಗಿಯಾಗಿ ಅಂತಿಮವಾಗಿ ನೆಟ್ಟಿಯನ್ನೂ ಮಾಡಿ  ಸೈ ಅನಿಸಿಕೊಂಡರು.
ಅಧ೯ ದಿನವಿಡಿ ನಡೆದ  ಸಾಮೂಹಿಕ ನಾಟಿಕಾಯ೯ ವಿದ್ಯಾಥಿ೯ಗಳಿಗೆ ನೇಗಿಲಯೋಗಿಯ ಪಾಠದ ಅನುಭವದ ಜೊತೆಗೆ ಕೆಸರು ನೀರಿನಲ್ಲಿ ಸಂಭ್ರಮದ ಅಲೆಯನ್ನೆಬ್ಬಿಸಿತು.
ಅದೇ ರೀತಿ ಗಂಟೆಗಟ್ಟಲೇ ಕಪ್ಪು ಹಲಗೆಯ ಮುಂದೆ ನಿಂತು ಪಾಠ ಮಾಡುವ ಮೇಸ್ಟ್ರುಗಳು ಕೂಡ ಕೈ ಕೆಸರು ಮಾಡಿಕೊಂಡರು. ವಿದ್ಯಾಥಿ೯ಗಳೊಂದಿಗೆ ಸೇರಿ ಕೆಸರು ಗದ್ದೆಯಲ್ಲಿ ನಾಟಿ ಮಾಡಿ ವಿದ್ಯಾಥಿ೯ಗಳಿಗೆ ಪ್ರೋತ್ಸಾಹ ನೀಡಿದರು.
ಗದ್ದೆಯ ಕೆಲಸದಲ್ಲಿ ತೊಡಗಿಕೊಂಡಿದ್ದು ಖುಷಿ ತಂದಿತು ಎಂದು ಇದೇ ಸಂದಭ೯ದಲ್ಲಿ ಕಾಲೇಜು ವಿದ್ಯಾಥಿ೯ಗಳು ಅಭಿಪ್ರಾಯಪಟ್ಟರು. ಮತ್ತೆ ಕೆಲವರು, ನಮ್ಮ ಮನೆಯಲ್ಲಿ ಗದ್ದೆ ಇದ್ದರೂ ಕೆಲಸ ಮಾಡಿದ ಅನುಭವ ಇರಲಿಲ್ಲ. ಇಲ್ಲಿ ಕೆಲಸ ಮಾಡಿ ಸಂಭ್ರಮಿಸಿದೆವು ಎಂದರು.
ಇಂದಿನ ಯುವ ಜನರಲ್ಲಿ ಕೖಷಿ ಬಗ್ಗೆ ಒಲವು ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಾಗೖತಿ ಮೂಡಿಸುವ ಉದ್ದೇಶದಿಂದ ಈ ಪ್ರಯತ್ನ ನಡೆಸಿದೆವು. ವಿದ್ಯಾಥಿ೯ಗಳು ಸಾಕಷ್ಟು ಸಂಭ್ರಮಪಟ್ಟರು ಎಂದು ಧಮ೯ಸ್ಥಳ ಗ್ರಾಮಾಭಿವೖದ್ಧಿ ಯೋಜನೆಯ ಕೖಷಿ ಮೇಲ್ವಿಚಾರಕ ಶಶಿಧರ್್ ಕನ್ನಡಪ್ರಭಕ್ಕೆ ವಿವರಿಸಿದರು.
ಮಲೆನಾಡು ಭಾಗದಲ್ಲಿ ಮಕ್ಕಳು ದ್ವಿತೀಯ ಪಿಯುಸಿ ಮುಗಿಯುತ್ತಿದ್ದಂತೆ ನಾವು ಬೆಂಗಳೂರಿಗೆ ಹೋಗುವವರು ಎಂಬ ಭಾವನೆ ಬಂದು ಬಿಟ್ಟಿದೆ. ಇಂತವರ ಮನಸ್ಸಿನಲ್ಲಿ ಕೖಷಿಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಇದಾಗಿತ್ತು ಎಂದು ತಿಳಿಸಿದರು.

ಇಷ್ಟಕ್ಕೆ ಮುಗೀಲಿಲ್ಲ- ನಾವು ರೈತರನ್ನು ಕೈ ಬಿಡಲ್ಲ- ಮಧು

ಮಧು ಉವಾಚ
- ಹೋರಾಟ ಪ್ರಶ್ನಿಸುವ ಹಕ್ಕು ಬಿಜೆಪಿ, ಕಾಂಗ್ರೆಸ್್ಗಿಲ್ಲ
- ನನ್ನ ಜೊತೆ ಹೆಜ್ಜೆ ಹಾಕಿದವರಲ್ಲಿ ಅಪ್ಪಾಜಿಯ ಕಂಡೆ
- ಹೋರಾಟ ಮಾಡಿ ಅಧಿಕಾರ ಪಡೆದ ಬಿಎಸ್್ವೈ ಈಗ ಎಲ್ಲಿಹೋದ್ರು?


ಸಂದಶ೯ನ- ಶ್ರೀಕಾಂತ ಭಟ್್

ಶಿವಮೊಗ್ಗ- ಹತ್ತಾರು ನಾಯಕರನ್ನು ರಾಜ್ಯಕ್ಕೆ ಕೊಡುಗೆಯಾಗಿ ಕೊಟ್ಟ ಬಗರ್್ಹುಕುಂ ಸಮಸ್ಯೆಯನ್ನೇ ಮುಂದಿಟ್ಟುಕೊಂಡು ಬೀದಿಗಳಿದ ಮಧು ಬಂಗಾರಪ್ಪ ಈಗ ಜಿಲ್ಲೆಯಲ್ಲಿ ಲೈಮ್್ಲೈಟ್್ನಲ್ಲಿರುವ ಯುವ ನಾಯಕ. ಕಳೆದ ತಿಂಗಳು ಒತ್ತುವರಿ ತೆರವಿನ ದುಸ್ವಪ್ನ ಕಂಡಿದ್ದ ಸೊರಬ ತಾಲೂಕಿನ ಕೆರೆಹಳ್ಳಿಯಿಂದ ಹೊರಟ ಜೆಡಿಎಸ್್ ಪಾದಯಾತ್ರೆಯನ್ನು ಮುನ್ನೆಡಿಸಿದ್ದು ಅವರೇ. ದಾರಿಯುದ್ದಕ್ಕೂ ಜಿಟಿಜಿಟಿ ಮಳೆ, ಕಿಚಿಪಿಚಿ ಕೆಸರನ್ನು ಲೆಕ್ಕಿಸದೇ ಪಾದಯಾತ್ರೆ ಭಾನುವಾರ ಶಿವಮೊಗ್ಗದಲ್ಲಿ ಸಂಪನ್ನಗೊಂಡಿತು. ಈ ಹೊತ್ತಿನಲ್ಲಿ ಮಧು ಬಂಗಾರಪ್ಪ ಮುಖದಲ್ಲಿ ಹೊಸ ಉತ್ಸಾಹ, ಹುಮ್ಮಸ್ಸು. ಪಾದಯಾತ್ರೆಯಿಂದಾಗಿ ಕಾಲಿನಲ್ಲಿ ಬೊಬ್ಬೆ ಎದ್ದಿದ್ದರೂ ಉತ್ಸಾಹದಿಂದ ಓಡಾಡಿಕೊಂಡಿದ್ದ ಮಧು ಬಂಗಾರಪ್ಪ ಅವರನ್ನು ಕನ್ನಡಪ್ರಭ ಮಾತಿಗೆಳೆದಾಗ ಅವರು ಅನೇಕ ಸಂಗತಿಗಳನ್ನು ಹರಿಯಬಿಟ್ಟರು.

1. ಯಾತ್ರೆಯ ಗುರಿ ಈಡೇರಿತಾ?
ಗುರಿ ಈಡೇರಿತಾ ಎನ್ನುವುದಕ್ಕೆ, ಗುರಿ ಈಡೇರಿಸುವ ಕೊಡುವ ಹಕ್ಕು ನಮ್ಮ ಕೈಯಲ್ಲಿ ಇಲ್ಲ. ನಾವು ವಿರೋಧಪಕ್ಷದಲ್ಲಿದ್ದೇವೆ. ಅದು ಯಾವುದೇ ಕಾರಣಕ್ಕೂ ಈಡೇರಿಸುತ್ತೇವೆ ಎಂಬುದು ಬರುವುದಿಲ್ಲ. ಸಾವ೯ಜನಿಕವಾಗಿ ಒಳ್ಳೆಯದಾಗಬೇಕೆಂಬ ಉದ್ದೇಶ ನಮ್ಮದು. ಈ ನಿಟ್ಟಿನಲ್ಲಿ ಗಟ್ಟಿಯಾದ ಹೆಜ್ಜೆ ಇಟ್ಟಿದ್ದೇವೆ.

2. ಯಾತ್ರೆ ಹಿಂದಿನ ಸ್ಪಷ್ಟ ಉದ್ದೇಶ ಏನಾಗಿತ್ತು?
ಬಗರ್್ ಹುಕುಂ ಒಂದು ಸೂಕ್ಷ್ಮ ವಿಚಾರ. 50-60 ವಷ೯ದ ಹಿಂದೆ ನನ್ನ ದೇಶ, ನನ್ನ ಜಾಗ, ದುಡಿದು ತಿನ್ನುತ್ತೇನೆ ಎಂದು ಜನರ ಭಾವನೆ ಇತ್ತು. ಹೀಗಾಗಿ ಬಗರ್್ಹುಕುಂ ಸೖಷ್ಟಿಯಾಗಿದೆ. ಸೈನಿಕರು ರಾಷ್ಟ್ರ ಕಾಪಾಡುತ್ತಾರೆ. ಅಂತಹ ರಕ್ಷಣೆ ಕೊಡುವ ಜವಾನನಿಗೆ ಕೊಡುವ ಬೆಂಬಲ ಗೌರವವನ್ನು ಹಸಿದ ಹೊಟ್ಟೆಗೆ ಅನ್ನ ಕೊಟ್ಟುವ ರೈತನಿಗೂ ನೀಡಬೇಕು. ಬಗರ್್ ಹುಕುಂ ಎಂದಾಕ್ಷಣ ರೈತರೇನು ಭಯೋತ್ಪಾದಕರೇ, ಅವರಿಗೆ ಹಕ್ಕುಗಳಿಲ್ಲವೇ. ಈ ನಿಟ್ಟಿನಲ್ಲಿ ಅಧಿಕಾರದಲ್ಲಿರುವವರು ರೈತರನ್ನು ರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ನಿಧಾ೯ರಗಳನ್ನು ಕೈಗೊಳ್ಳಬೇಕಾಗಿದೆ. ಹೀಗಾಗಿ ಎಚ್ಚರಿಸುವ ದೖಷ್ಟಿಯಿಂದ ಹೋರಾಟ. ಇದರ ಹೊರತಾಗಿ ಬೇರೆ ಉದ್ದೇಶವಿಲ್ಲ.

3. ಮಧು ಬಂಗಾರಪ್ಪ ಇಷ್ಟು ದಿನ ಮಲಗಿದ್ದರು, ಈಗ ಎದ್ದಿದ್ದಾರೆ ಹಾಗೆಯೇ ಇಷ್ಟು ದಿನ ಏನು ಮಾಡುತ್ತಿದ್ದರೂ ಎಂದು ಆಡಳಿತ ಪಕ್ಷದ ನಾಯಕರು ಹೋರಾಟದ ಬಗ್ಗೆ ಟೀಕೆ ಮಾಡಿದರು, ನೀವೆನಂತೀರಾ?
ಹೌದು ನಾನು ಮಲಗಿದ್ದೆ ಎಂದೇ ಹೇಳುತ್ತೇನೆ. ಹಾಗಾದರೆ ಇಷ್ಟು ದಿನ ಟೀಕೆ ಮಾಡಿದವರು ಏನು ಮಾಡುತ್ತಿದ್ದರು ಎಂದು ಸ್ಪಷ್ಟಪಡಿಸಲಿ. ಅಧಿಕಾರವಿದೆ, ಕೇಂದ್ರದ ಮೇಲೆ ಬಿಗಿ ಪಟ್ಟು ಹಾಕಿ ಕಾನೂನು ತಿದ್ದುಪಡಿ ಮಾಡಿಸಬಹುದಿತ್ತಲ್ಲವೇ. ಅವರಿಂದೇಕೆ ಸಾಧ್ಯವಾಗಲಿಲ್ಲ. ಖಚು೯ಗಾಗಿ ಹೋರಾಟ ಮಾಡಿ ರೈತರನ್ನೇ ಮರೆತರು. ನನ್ನ ವಯಸ್ಸು, ಅನುಭವ ಅವರಿಗಿಂತ ಕಡಿಮೆಯೇ ಎಂದು ಒಪ್ಪಿಕೊಳ್ಳುತ್ತೇನೆ. ಆದರೆ, ಟೀಕಿಸುವ ಬದಲು ಕೆಲಸ ಮಾಡಿ ತೋರಿಸಲಿ. ರೈತರ ಕಷ್ಟಕ್ಕೆ ಆಗಿಬರಲಿ.

4. ನಿಮ್ಮ ಹೋರಾಟವನ್ನು ಪ್ರಶ್ನಿಸುವ ಪ್ರತಿಪಕ್ಷಗಳಿಗೆ ನಿಮ್ಮ ಪ್ರತಿ ಪ್ರಶ್ನೆಗಳೇನು?
ಬಿಎಸ್್ ಯಡಿಯೂರಪ್ಪ ಬಗರ್್ಹುಕುಂ ರೈತರ ಪರವಾಗಿ ಪಾದ ಯಾತ್ರೆ ಮಾಡಿ ನಾಯಕರಾದರು. ಈಗ ಎಲ್ಲಿ ಹೋಯಿತು ಹೋರಾಟ. ಅವರಿಂದೇಕೆ ಹಕ್ಕುಪತ್ರಕೊಡಿಸಲು ಸಾಧ್ಯವಾಗಿಲ್ಲ ಎಂದು ಕೇಳುತ್ತೇನೆ. ನಿಮಗೆ ನಮ್ಮ ಹೋರಾಟ ಪ್ರಶ್ನಿಸುವ ಹಕ್ಕಿಲ್ಲ ಎಂದೇ ಬಿಜೆಪಿ ಹಾಗೂ ಕಾಂಗ್ರೆಸ್್ ನಾಯಕರಿಗೆ ಹೇಳುತ್ತೇನೆ ಎಂದರು.

5. ಯಾತ್ರೆಯಲ್ಲಿ ಕಂಡ ವಿಶೇಷ ಅನುಭವ?
ಪ್ರತಿ ಹೆಜ್ಜೆ ಹೆಜ್ಜೆಗೂ ಕಂಕಣ ಕಟ್ಟಿದರು, ಆರತಿ ಬೆಳಗಿದರು, ಆತ್ಮೀಯವಾಗಿ ಸ್ವಾಗತಿಸಿದರು. ನಿರೀಕ್ಷೆಗೆ ಮೀರಿದ ಬೆಂಬಲ ಸಿಕ್ಕಿತು. ಅದೇ ರೀತಿ ಹೊಸನಗರದ ಶೇಷಪ್ಪ ಎಂಬುವರು ದಾರಿಯಲ್ಲಿ ಬಿದ್ದಿದ್ದ ಕರಪತ್ರವನ್ನು ನೋಡಿ ಹೋರಾಟದಲ್ಲಿ ಪಾಲ್ಗೊಂಡರು, ಪ್ರತಿ ದಿನ ನಮ್ಮೊಂದಿಗೆ ಹೆಜ್ಜೆ ಹಾಕಿದರು. 87ರ ಹರೆಯದಲ್ಲೂ ಹುಮ್ಮಸ್ಸಿನಿಂದ ಪಾಲ್ಗೊಂಡರು, ಬಂಗಾರಪ್ಪನವರನ್ನು ನೆನೆದರು. ಈ ಘಟನೆ ಮರೆಯಲಸಾಧ್ಯ.

6. ಯಾತ್ರೆಯಲ್ಲಿ ಕಂಡುಕೊಂಡ ಸತ್ಯ?
ನನ್ನ ತಂದೆ ಪ್ರಾಕ್ಟಿಕಲ್್ ಆಗಿ ಇಂದು ನನ್ನೊಂದಿಗೆ ಇಲ್ಲದಿರಬಹುದು. ಆದರೆ, ಯಾತ್ರೆಯಲ್ಲಿ ನನ್ನೊಂದಿಗೆ ಹೆಜ್ಜೆ ಹಾಕಿದ ಪ್ರತಿಯೊಬ್ಬರ ಮನಸ್ಸು, ಹೖದಯದಲ್ಲಿ ಅಪ್ಪಾಜಿ(ಬಂಗಾರಪ್ಪ)ಯನ್ನು ಕಂಡೆ. ಧನ್ಯನಾದೆ.

7. ಪಾದಯಾತ್ರೆ ಆಯ್ತು, ಮುಂದೇನು?



ನಾವು ಕಾನೂನಿಗೆ ತಲೆ ಬಾಗುತ್ತೇವೆ, ಕಾನೂನಿಗೆ ವಿರುದ್ಧವಾಗಿ ಹೋಗಲಾರೆ. ಅಂದ ಮಾತ್ರಕ್ಕೆ ರೈತರನ್ನು ಕೈಬಿಡುವ ಪ್ರಶ್ನೆ ಇಲ್ಲ. ಅವರ ಜೊತೆಗಿರುತ್ತೇವೆ, ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಪಾದಯಾತ್ರೆ ವೇಳೆ ನಡೆಸಿದ ಸಹಿ ಸಂಗ್ರಹಣೆಯನ್ನು ರಾಷ್ಟ್ರಪತಿ, ಪ್ರಧಾನಿಗೆ ಅಪಿ೯ಸಲಾಗುತ್ತದೆ. ಮುಂದೆ ಯಾವ ರೀತಿ ಹೋರಾಟ ಮಾಡಬೇಕೆಂಬುದನ್ನು ಪಕ್ಷ ನಿಧ೯ರಿಸುತ್ತದೆ. ಇಷ್ಟಕ್ಕೆ ಮುಗೀಲಿಲ್ಲ.

ರಾಜ್ಯದ ಪಶು ಆಸ್ಪತ್ರೆಗಳ ಕಾಯ೯ನಿವ೯ಹಣೆ ವೇಳೆ ಬದಲು

- ಬದಲಾದ ರೈತರು ಹಾಗೂ ಪಶುವೈದ್ಯರ ಕಾಯ೯ಚಟುವಟಿಕೆ
- ಪಶು ಇಲಾಖೆ ಸಂಘಟನೆಗಳಿಂದ ಒತ್ತಡ, ಅಧಿಕಾರಿಗಳ ವರದಿ ಹಿನ್ನೆಲೆ
- ಬೆಳಿಗ್ಗೆ ಅಧ೯ಗಂಟೆ ತಡ ಆರಂಭ, ಅಧ೯ಗಂಟೆ ಮುಂಚಿತವಾಗಿ ಮುಚ್ಚುವ ಕೇಂದ್ರಗಳು

ಶ್ರೀಕಾಂತ ಭಟ್್
ಶಿವಮೊಗ್ಗ- ಪಶು ಸಾಕಾಣಿಕೆದಾರರಿಗೊಂದು ಸುದ್ದಿ, ರಾಜ್ಯದಲ್ಲಿರುವ 3450 ಪಶು ಆಸ್ಪತ್ರೆಯ ಸಮಯ ಬದಲಾಗಿದೆ.
ರೈತರ ಮನಸ್ಥಿತಿ ಮತ್ತು ಕಾಯ೯ಚಟುವಟಿಕೆ ಬದಲಾದ ಹಿನ್ನೆಲೆಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯು ತನ್ನ ಸಂಸ್ಥೆಗಳ ಕಾಯ೯ನಿವ೯ಹಣೆ ಅವಧಿಯಲ್ಲಿ ಕೊಂಚ ಬದಲಿಸಿಕೊಂಡಿದೆ.
ರಾಜ್ಯ ಸಕಾ೯ರಿ ಪಶು ವೈದ್ಯರ ಸಂಘ, ಆಡಳಿತಾತ್ಮಕ ಅಧಿಕಾರಿಗಳ ಮತ್ತು ನೌಕರರ ಸಂಘ, ಕನಾ೯ಟಕ ಪಶುವೈದ್ಯಕೀಯ ಪರೀಕ್ಷಕರ ಸಂಘ, ರಾಜ್ಯ ಪಶುಸಂಗೋಪನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಡಿ ಗ್ರೂಪ್್ ನೌಕರರ ಸಂಘ, ರಾಜ್ಯ ಪಶುವೈದ್ಯರ ಸಂಘ, ಕನಾ೯ಟಕ ಪಶು ವೈದ್ಯಕೀಯ ಸಂಘದ ಅಭಿಪ್ರಾಯದ ಆಧಾರದ ಮೇಲ ವೇಳಾಪಟ್ಟಿಯನ್ನು ಬದಲಿಸಲಾಗಿದೆ.
ಇದರ ನಡುವೆಯೇ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಉಪ ನಿದೇ೯ಶಕರು ಜಿಲ್ಲಾ ಪಂಚಾಯಿತಿಗಳ ಅಭಿಪ್ರಾಯದೊಂದಿಗೆ ಸಲ್ಲಿಸಿರುವ ವರದಿಯನ್ನು ಪರಿಶೀಲಿಸಿ ಅಂತಿಮವಾಗಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪಶುವೈದ್ಯ ಸಂಸ್ಥೆಗಳ ಕಾಯ೯ನಿವ೯ಹಣೆಯ ವೇಳೆಯನ್ನು ಬದಲಿಸಲಾಗಿದೆ.
- ಬದಲಾದ ಸಮಯ
ಕೆಲಸದ ದಿನಗಳಲ್ಲಿ ಪಶುವೈದ್ಯ ಸಂಸ್ಥೆಗಳು ಬೆಳಿಗ್ಗೆ 8.30ರಿಂದ ಮಧ್ಯಾಹ್ನ 12.30ರವರೆಗೆ, ಅಪರಾಹ್ನ 3.30ರಿಂದ ಸಂಜೆ 5.30ರವರೆಗೆ ಕಾಯ೯ನಿವ೯ಹಿಸುತ್ತಿತ್ತು. ಇನ್ನು ಮುಂದೆ ಈ ಕೇಂದ್ರಗಳು ಬೆಳಿಗ್ಗೆ 9ಗಂಟೆಗೆ ಆರಂಭವಾಗಿ ಮಧ್ಯಾಹ್ನ 1 ಗಂಟೆ ವರೆಗೆ ಅಪರಾಹ್ನ 3ರಿಂದ ಸಂಜೆ 5 ಗಂಟೆ ವರೆಗೆ ಕಾಯ೯ನಿವ೯ಹಿಸುವುದು. ಅಥಾ೯ತ್್, ಪಶು ಆಸ್ಪತ್ರೆಗಳು ಬೆಳಿಗ್ಗೆ ಅಧ೯ಗಂಟೆ ತಡವಾಗಿ ಆರಂಭವಾಗಿ, ಸಂಜೆ ಅಧ೯ ಗಂಟೆ ಮುಂಚಿತವಾಗಿ ಬಾಗಿಲು ಮುಚ್ಚಲಿವೆ.
ಸಾವ೯ತ್ರಿಕ ರಜಾ ದಿನಗಳಲ್ಲಿ ಈ ಮುಂಚೆ ಬೆಳಿಗ್ಗೆ 8.30ರಿಂದ 12.30ರವರೆಗೆ ಕಾಯ೯ನಿವ೯ಹಿಸುತ್ತಿದ್ದ ಕೇಂದ್ರಗಳು ಇನ್ನು ಮುಂದೆ 9ರಿಂದ 1ಗಂಟೆಗೆ ಕಾಯ೯ನಿವ೯ಹಿಸುವುದು.
ರಾಜ್ಯದ ತಾಲೂಕು ಮಟ್ಟದ ಕೆಳಗಿರುವ ಆಸ್ಪತ್ರೆಗಳಲ್ಲಿ ಈ ತಿಂಗಳಿನಿಂದಲೇ ಬದಲಾದ ಸಮಯದಲ್ಲಿ ಕಾಯ೯ನಿವ೯ಹಣೆಯಾಗಲಿದೆ.

- ಏಕಾಗಿ ಬದಲಾವಣೆ?
ಇತ್ತೀಚಿನ ದಿನಗಳಲ್ಲಿ ರೈತರ ಮನಸ್ಥಿತಿ ಬದಲಾವಣೆಯಾಗಿದೆ. ಜೊತೆಗೆ ಅವರ ಕಾಯ೯ಚಟುವಟಿಕೆಯಲ್ಲಿ ಕೂಡ ಬದಲಾವಣೆಯಾಗಿದೆ. ಈ ಹಿನ್ನೆಲೆಯಲ್ಲಿ ವೇಳಾಪಟ್ಟಿ ಬದಲಿಸಿದ್ದು ಸರಿಯಾದ ಕ್ರಮ ಎನ್ನುತ್ತಾರೆ ಕನಾ೯ಟಕ ಪಶು ವೈದ್ಯಕೀಯ ಸಂಘದ ರಾಜ್ಯ ಉಪಾಧ್ಯಕ್ಷ ಟಿ.ಎಚ್್. ನಟರಾಜ್್.
ಈ ಮುಂಚೆ ಗ್ರಾಮೀಣ ಭಾಗದಲ್ಲಿ ಜಾನುವಾರನ್ನು ಆಸ್ಪತ್ರೆಗೆ ತರುವ ಪರಿಪಾಟ ಇತ್ತು. ಕೖತಕ ಗಭ೯ಧಾರಣೆ, ಚಿಕಿತ್ಸೆ ಎಲ್ಲಕ್ಕೂ ಆಸ್ಪತ್ರೆಯನ್ನು ಅವಲಂಬಿಸಿದ್ದರು. ಆದರೆ, ಈ ಕಾಯ೯ ಬದಲಾಗಿದೆ. ವೈದ್ಯರೇ ರೈತರ ಕ್ಷೇತ್ರಗಳಿಗೆ ಭೇಟಿಕೊಟ್ಟು ಜಾನುವಾರನ್ನು ಪರೀಕ್ಷಿಸುತ್ತಾರೆ, ಚಿಕಿತ್ಸೆ ನೀಡುತ್ತಿದ್ದಾರೆ. ಅದೇ ರೀತಿ ಕೖಷಿ ಕಾಮಿ೯ಕರ ಕೊರತೆಯಿಂದಾಗಿ ರೈತರು ಕೂಡ ಜಾನುವಾರನ್ನು ಆಸ್ಪತ್ರೆಗೆ ಕರೆತರಲು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಶಿವಮೊಗ್ಗದ ಪಶು ವೈದ್ಯರೊಬ್ಬರ ಅಭಿಪ್ರಾಯ.
ಪಶು ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಯೋಜನೆ ನಡೆಸುವುದರಿಂದ  ಪಶುವೈದ್ಯರೇ ನೇರವಾಗಿ ಹಳ್ಳಿಗೆ ಭೇಟಿಕೊಡುತ್ತಿದ್ದಾರೆ. ಹೀಗಾಗಿ ಸಮಯ ಬದಲಾವಣೆ ಅವಶ್ಯಕತೆ ಇತ್ತು ಎಂದು ಟಿ.ಎಚ್್. ನಟರಾಜ್್ ಸಮಥಿ೯ಸಿಕೊಳ್ಳುತ್ತಾರೆ. ಅದೇ ರೀತಿ ಮಧ್ಯಾಹ್ನದ ಊಟದ ವಿರಾಮ 2 ಗಂಟೆ ಇದ್ದು, ಇಷ್ಟು ಅಗತ್ಯವಿರಲಿಲ್ಲ ಎಂದು ಎಂದು ಹೇಳಿದ್ದಾರೆ.